LET'S MEET...!!!
ಇಂಟರ್ನೆಟ್ಟಲ್ಲಿ ಒಬ್ರು ಬರೆದಿದ್ದು ಇನ್ನೊಬ್ರು ಓದಿ ಖುಶಿ ಪಡ್ತೀವಿ, ಒಬ್ರಿಗೊಬ್ರು ಪರಿಚಯ ಇರ್ತೀವಿ.. ಆದ್ರೆ, ನಿಜಜಗತ್ತಿನಲ್ಲಿ ಒಬ್ರಿಗೊಬ್ರು ಭೇಟಿ ಆದಾಗ ಆ ಮಜಾನೇ ಬೇರೆ!ನವ ಪ್ರಕಾಶನ ಸಂಸ್ಥೆ 'ಪ್ರಣತಿ', blogger's meet ಮಾಡ್ಬೇಕು ಅಂತ ಹೊರಟಿದೆ. ಮಾರ್ಚ್ ೧೬ರ ಭಾನುವಾರ ಸಂಜೆ ನಾವೆಲ್ಲ ಪರಸ್ಪರ ಭೇಟಿಯಾಗಬಹುದಾದ ಅವಕಾಶ ಒದಗಿ ಬಂದಿದೆ...ದಿನ - ೧೬ ಮಾರ್ಚ್ ೨೦೦೮ಸಮಯ - ಸಂಜೆ ನಾಲ್ಕು ಗಂಟೆಜಾಗ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು ಆವತ್ತು ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಬರ್ತಾರೆ, ಇರ್ತಾರೆ, ಮಾತಾಡ್ತಾರೆ. ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ನಂಗೆ 'ಪ್ರಣತಿ' ತಂಡ ಪ್ರೀತಿಯಿಂದ ಆಹ್ವಾನಿಸಿದೆ... ನೀವೂ ಬನ್ನಿ.ಈ ಪೋಸ್ಟ್ ನೋಡಿದವರೆಲ್ರಿಗೂ ಜಾಲಿಗರ GET-TOGETHERಗೆ ಸುಸ್ವಾಗತ... :-)
No comments:
Post a Comment