Showing posts with label ಕೆಟ್ಟ ಕವಿತೆ :). Show all posts
Showing posts with label ಕೆಟ್ಟ ಕವಿತೆ :). Show all posts

Monday, November 7, 2022

ನೀನು ಮತ್ತು ನೋವು

 ನನ್ನೆದುರು ನೀನಿರುವ ಅರೆಕ್ಷಣ

ನನ್ನೊಳಗಿನ ನೋವಿನೊಡನೆ 

ನನ್ನ ಹೋರಾಟ

ಬಿದ್ದರೆ ಬೀಳಬೇಕು 

ನೋವಿನ ಹೆಣ, ಹಾಗೆ 

ಕಣ್ಣಂಚಿನ ಕಟ್ಟೆ 

ಒಡೆಯದಂತೆ ಕಾಯುತ್ತೇನೆ

ನಾನೇ ಗೆಲ್ಲುತ್ತೇನೆ

ಆದರೆ 

ನೋವ ಮಾತ್ರ 

ನಾ ಕೊಲ್ಲುವುದಿಲ್ಲ 

ಯಾಕೆ ಗೊತ್ತಾ

ನೀನಿಲ್ಲದ ಕೊನೆಯಿಲ್ಲದ 

ಯುಗಗಳಲ್ಲಿ

ಮುಳುಗಿ ತೇಲಲಿಕ್ಕೆ 

ನೋವು ಬೇಕು


Wednesday, August 10, 2022

ಅಪ್ಪ ಹಾಕಿದ ಆಲದ ಮರ...

ಅಪ್ಪ ಹಾಕಿದ ಆಲದ ಮರ

ನಾನು ಬೆಳೆಸಿದ ಈ ಮರ

ಬೇರೇನೂ ಬೆಳೆಯಬಿಡದು

ಹಾಗಾಗಿ ಅದರಡಿ ಜಾಗವೋ ಜಾಗ

ನೆರಳು, ಮೇವು ಕೊಡುತ್ತಿದೆ

ದಣಿದು ಬಂದ ಜನಕ್ಕೆ

ಪ್ರಾಣಿಗಳಿಗೆ, ಹಕ್ಕಿಗಳಿಗೆ

ಹೂವುಗಳೆಷ್ಟು ಚಂದ,

ನನ್ನ ದೇವರಿಗೆ ಅದರಿಂದಲೇ ಕಳೆ

ಹಣ್ಣುಗಳೆಷ್ಟು ರುಚಿ

ಹುಳಿ ಬರಿಸಿ ವೈನ್ ಮಾಡಿ

ಕುಡಿದಿದ್ದೇನೆ ನಾನು

ಸುರೆಯೆಂಬುದು ಸುಮ್ಮನೆಯೇ?

ದೇವತೆಗಳದೇ ಅಮಲು

ಗಾದೆ ಸುಮ್ಮನೆ ಮಾಡಲಿಲ್ಲ

ಸತ್ತರೆ ಇದರ ಬೀಳಲಿಗೇ

ನೇತು ಸಾಯಬೇಕು ನಾನು,

ಅಷ್ಟು ತಣ್ಣನೆಯ ಆಲದ ಮರ

ಇದರಾಚೆಗೆ ಹೋದವರಿಗೆ

ಮಾತ್ರ ಗೊತ್ತು ಮರದಡಿಯ ಸುಖ


ಆದರೊಂದು ತೊಂದರೆ...

ತೊಂದರೆಯೆಂದೆನೇ, ಅಲ್ಲಲ್ಲ

ಸಹಜ ಬೆಳವಣಿಗೆ.

ಮರದ ಬೇರು ತೂರಿದೆ

ನನ್ನ ನೆಲದಾಳಕ್ಕೆ...

ಅಲ್ಲೆಲ್ಲೋ ಆಳದಲ್ಲಿ ಹುದುಗಿದ

ನೀರೇ ಇದರ ಜೀವಾಳ, ಬಂಡವಾಳ

ಕೀಳಹೊರಟರೆ ಎಲ್ಲಿಂದ ಕೀಳಬೇಕೋ

ತಿಳಿಯದ ಚಕ್ರವ್ಯೂಹ

ಒಂದೆಡೆ ಕಿತ್ತರೆ ಇನ್ನೆಲ್ಲೋ

ಹುಟ್ಟಿಬರುವ ಜಾದೂ...

ಈಗ ಪಕ್ಕದ ಮನೆಯವರ

ಅಡಿಪಾಯಕ್ಕೆ ತೂರಿ

ಅಲ್ಲಾಡಿಸುತ್ತಿದೆಯಂತೆ

ಅವರ ಮನೆಯೊಳಗೆ ಒಡೆದ ನೆಲ,

ಸೀಳಿದ ಗೋಡೆ ಹೇಳುತ್ತಿವೆ ಸಾಕ್ಷಿ

ಮನೆ ಬಿದ್ದು ಹೋದರೆ

ಅವರು ಬೀಳಬೇಕು ಬೀದಿಗೆ

ಹುಡುಕಬೇಕು ಬೇರೆ ನೆಲೆ

ಅವರೀಗ ನನ್ನ, ಮತ್ತೆ

ಮರದಡಿಯಿರುವವರನ್ನ

ದಿಟ್ಟಿಸುತ್ತಾರೆ ಸಂಶಯದಿಂದ

ಅರೇ, ನಾವೇನು ಮಾಡಿದೆವು,

ನಾನೋ ಸಾಧು

ಮರದ ನೆರಳಿಗೆ ಬಂದವರು

ನನ್ನ ಅತಿಥಿಗಳು

ಕೂತಿದ್ದು ತಪ್ಪೇ,

ವಿರಮಿಸಿದ್ದು ತಪ್ಪೇ,

ಸಂಭ್ರಮಿಸಿದ್ದು ತಪ್ಪೇ?

ಅವರೂ ಹಾಕಿಲ್ಲವೇ

ಅವರಂಗಳದಲ್ಲಿ ಗಿಡ

ನಾಳೆ ಅದು ದೊಡ್ಡದಾದಾಗ

ನನ್ನ ಮನೆಗೂ ಇದೇ ಗತಿಯಲ್ಲವೇ?


ಆದರೆ...

ಮರಕ್ಕೆ ಬೆಳೆಯುವುದಷ್ಟೇ ಗೊತ್ತು

ಅದ ಬೆಳೆಸಿದ್ದು ನಾನೇ ತಾನೇ

ನನಗೆ ನೆರಳು, ನೀರು,

ಅಮಲು ಕೊಡುವ ಮರ

ಅವರ ಮನೆಯೊಡೆದರೆ

ಆ ಪಾಪದಲ್ಲಿ ನನ್ನ ಪಾಲೆಷ್ಟು?

ಹೂವು, ಕಡಲು, ಬೆಂಕಿ

ಕಾಡೊಳರಳಿದ

ಹೆಸರ ತಿಳಿಯದ

ಹೂವಿನಂತಾ ನಿನ್ನ

ಎದೆಯೊಳಗೆ ಬಚ್ಚಿಟ್ಟು

ಮೆರೆಯುತ್ತೇನೆ... 


ಆಳದೊಳಗಿಳಿದರೂ

ಅಳೆಯಲಾಗದ

ಕಡಲಂತಹಾ ನಿನ್ನ

ಕಣ್ಣಲ್ಲಿ ಕಾಪಿಟ್ಟು 

ಹೊಳೆಯುತ್ತೇನೆ... 


ಕಲ್ಲಿನಾಳವ ಹೊಕ್ಕು

ಬೆಣ್ಣೆಯನ್ನಾಗಿಸಿದ

ಬೆಂಕಿಯಂತಾ ನಿನ್ನ

ನೆನಪುಗಳ ಹಿಡಿದಿಟ್ಟು 

ಹೊರಳುತ್ತೇನೆ...

Sunday, April 3, 2022

ನಂಬೋತರ ಪ್ರೂಫ್ ಕೊಡು...




ಮುಚ್ಚಿದ ಶಟರಿನ ಮೇಲೆ
ಬಿಲ್ಲೆತ್ತಿ ನಿಂತಿದ್ದೀ ಯಾಕೆ
ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ
ಕಾಯುವವ ತಾನೆ ನೀ,
ಕೊಲುವ ದ್ವೇಷ ಯಾಕೆ
ಬಡಪಾಯಿ ಹನುಮರ ಎದೆಗಳ ಕಲಕುವೆ ಯಾಕೆ
ಹಸಿದ ಹೊಟ್ಟೆಗೆ ನಿನ್ನ ಹೆಸರಲಿ ಹಚ್ಚುತ್ತಾನೆ ಬೆಂಕಿ,
ಕನಲುತ್ತಾನೆ, ಕಲಕುತ್ತಾನೆ ನಮ್ಮ ಆ-
ರಾಮ, ನಿನ್ನ ಅಮಲಲ್ಲಿವ ಕುರುಡ
ರಹೀಮನ ಕಷ್ಟಕ್ಕೆ ಇವ ಬಂಡೆಕಲ್ಲು
ಹುಡುಕುತ್ತಾನೆ ಕಾಣದ ಅಶೋಕವನಕ್ಕೆ,
ಇಲ್ಲದ ರಾವಣಗೆ, ಅಳು ಮರೆತ ಸೀತೆಗೆ
ಪರದೆಯೊಳಗೆ ಬಿಕ್ಕುವ ಬೇಟಿಯರ
ಬಚಾವ್ ಕರೆಗಿವ ಕಿವುಡು
ನಿನ್ನ ಹೆಸರಲಿ ಕಾಣದ ಕೈ
ಆಡಿಸಿದಂತಾಡುತ್ತಾನೆ ಕಾಲಾಳು ಹನುಮ
ಓಟು ನಾಟಕ ಎರಡೂ ಮುಗಿದಾಗ
ನೀನು ಅವನು ಇಬ್ಬರಿಗೂ ರೆಸ್ಟು
ನೀನು ಹೀಗೆ ಬಿಲ್ಲೇರಿಸಿ ಸದ್ದಿಲ್ಲದೆ ನಿಲ್ಲುತ್ತಿ,
ಇಲ್ಲ ಸಿನಿಮಾಗಳಲಿ ಬಿಲ್ಲೆತ್ತಿ ಕೊಲ್ಲುತ್ತಲೇ ಇರುತ್ತಿ
ಊಟ ನಿದ್ರೆ ನಿನಗೆ ಒಂದೂ ಬೇಡ
ಹನುಮ ಹಾಗಲ್ಲ... ಮತ್ತೆ ಕಿಷ್ಕಿಂದೆಯಲಿ ಬಂದಿ,
ಬಣ್ಣ ಮೆತ್ತಿ ಸಿಗ್ನಲಲಿ ಬೇಡಿದರೇ ಒಪ್ಪೊತ್ತು ಊಟ
ಕೂಡುವ ಕಳೆಯುವ ಬುದ್ಧಿ ಇವನಿಗಿಲ್ಲ
ಆಟದ ಗೊಂಬೆ ಇವನು ಗುರಿಯೇ ಇಲ್ಲ...
ನೀನು ದೇವರೇ ಹೌದಾ?
ನಂಬೋತರ ಪ್ರೂಫ್ ಕೊಡು
ಬಡವರ ಬದುಕಿನ ಶಟರು ಮುಚ್ಚುವ
ಹನುಮಗೆ ಬದುಕು ಕೊಡು
ಕಾಯುವವ ತಾನೆ ನೀ,
ಕಾಯವನ ಚಾಣಕ್ಯರ ಸಂಚಿನಿಂದ
ಒಡೆಯುವ ಕೆಲಸದಿಂದ
ಹೊಟ್ಟೆಗೆ ಹಿಟ್ಟುಬಟ್ಟೆ ಕೊಟ್ಟು
ಕಟ್ಟೋದು ಹೇಳಿಕೊಡು
ಸರಿತಪ್ಪು ಕಾಣುವ ಕಣ್ಣು ಕೊಡು
ನಿನ್ನೊಳಗೆ ಒಲುಮೆಯಿದೆಯಾ?
ಅದ ಇವನೆದೆಯಲಿ ಬಿತ್ತು,
ಗಿಡವಾಗಿ ಮರವಾಗಿ ಬೆಳೆಯಬಿಡು..
ಆ ಮರವೇ ರಾಮನಾಗಲಿ ಒಂದು ದಿನ...
ಪ್ರೀತಿಯೇ ದೇವರಾಗಲಿ ಒಂದು ದಿನ
**********
Are you really a GOD? Give us a proof
Whom are you aiming at,
standing still on the closed shutter
Why do you emit fire
Even on the silver screen
You are the protector,
Why such deadly cold hatred?
And why do you stir the hearts
and brains of poor Hanumans?
He sets hungry stomachs on fire in your name
With his fury, he shakes our comfort,
drunk on your devotion
He stonewalls himself from Raheem's troubles
He searches for the unseen Ashoka forest,
Non-existent Ravana,
For Seetha, who doesn't cry anymore
But he's deaf to the bachaav cries of betis in hijab
He's a pawn who plays to the pleasure of
masters uttering your name
When polls and the drama are over,
Both of you get to rest
You will stand still on shutters
Or keep killing "evil" in cinemas
You don't need food or sleep
But Hanuma is different
He's trapped in his Kishkindha
As unsettled as a bird without a sky
He'll earn his bread if he dresses up
and stands in the signal
He can't calculate his moves in life
He's just a toy, an aimless one at that
Are you really a GOD?
Give us believable proof
To Hanuma, who closes shutters
of the poor folks, give some life
And a sky high enough to fly
with all his dreams and rainbows
You're the protector, right?
Save him from the clutches
of cunning politicos
from the task of breaking lives
Give him food, clothes and
teach him to build
Give him the eyes to see the truth and lies
Aren't you a symbol of LOVE?
Please seed some into his heart
Let it grow into a plant, a tree
Let the tree become YOU one day
Let LOVE become GOD one day...



Tuesday, November 9, 2021

ಹಾಗೇ ಇರಲಿ ಬಿಡು...

ನನ್ನ ನಿನ್ನ ನಡುವಿರುವುದು

ಒಂದು ದೊಡ್ಡ ಆನೆ-

ಯಾಗಿದ್ದರೆ ಏನು ಮಾಡುವುದು? 

ಮುಟ್ಟುವುದು ಬೇಡ - 

ನಾನು-ನೀನು ತಲೆಗೊಂದು ಮಾತಾಡಿ

ಆನೆಯ ಇರುವಿಕೆಯೇ ಹಾಳಾದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದೊಂದು

ದೊಡ್ಡ ಬಣ್ಣದ ಗುಳ್ಳೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ-

ಮುಟ್ಟಿದರೆ ಗುಳ್ಳೆ ಒಡೆದು 

ಕಣ್ಣೊಳಗಣ ಬಣ್ಣ ಅಳಿಸಿಹೋದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದು 

ದೊಡ್ಡದೊಂದು ಸೊನ್ನೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ ಬಿಡು -

ಸೊನ್ನೆಯೊಳಗಿನ ಸೆಳೆತಕ್ಕೆ

ನಾನೂ ನೀನೂ ಸೊನ್ನೆಯಾದೇವು...

ಹಾಗೇ ಇರಲಿ ಬಿಡು.

Tuesday, July 27, 2021

ಕಣ್ಣಿನ ಭಾಷೆಯ ಬಣ್ಣವೆ ಬದಲು



ಕಣ್ಣಿನ ಭಾಷೆಯ
ಬಣ್ಣವೆ ಬದಲು
ತಣ್ಣನೆ ಕೊಲ್ಲುವ ಪರಕೀಯ

ಸೊಲ್ಲನು ಮರೆತು
ಎಲ್ಲೋ ಕಳೆದಿಹ
ಕಲ್ಲಾಗಿಹೆ ನೀ ಓ ಗೆಳೆಯ

ಮನಸಲಿ ಕಟ್ಟಿದ
ನೀರಿಗೆ ಬೇಕು
ಒಡ್ಡುಗಳಿಲ್ಲದ ಹಾದಿಗಳು

ಮಾತೇ ಮನಗಳ
ಬೆಸೆಯುವ ಬಳ್ಳಿ
ಮೌನದೆ ಬೆಳೆವವು ಗೋಡೆಗಳು

ಗೋಡೆಗಳಳಿಯಲಿ
ಸೇತುವೆ ಬೆಳೆಯಲಿ
ಮುಳುಗಲಿ ಹಗೆತನ ಒಲವಿನಲಿ

ಬೆಳಕಿನ ತಿಳಿವಲಿ
ಕರಗಲಿ ಮಬ್ಬಿದು
ಕಾವಳವಳಿಯಲಿ ನಲಿವಿನಲಿ

ತೆರೆಯಲಿ ಮನಮನೆ
ಕಳೆಯಲಿ ಕೊಳೆಯು
ಹೊಸಬೆಳಗನು ಸ್ವಾಗತಿಸೋಣ

ನಾ ನಿನಗಿರುವೆನು
ನೀ ಬಾ ನನ್ನೆಡೆ
ಹರುಷದ ಸೇತುವೆ ಕಟ್ಟೋಣ

Friday, June 18, 2021

ಮಿಡಿಯಲು ನನ್ಸಲಿ ಹೃದಯವೇ ಇಲ್ಲ

ಕಾಯುವರಿಲ್ಲದೆ ಬಾಡಿದ ಹೆಣಗಳು
ದಿನವಿಡಿ ಧಗಧಗ ಉರಿಯುವ ಚಿತೆಗಳು
ಮನೆಗಳು ಮನಗಳು ಭಣಭಣಭಣಭಣ
ಕಿಟಿಕೆಯ ಆಚೆಗೆ ಗದ್ದಲ ಗದ್ದಲ
ಆಡುವ ಮಾತಿಗೆ ಕಾಣದು ಅಳತೆ
ಕೇಳುವ ಕಿವಿಗಳಿಗಿಲ್ಲಿದೆ ಕೊರತೆ
ಇಂದ ಬವಣೆಯಲಿ ತಳ್ಳಿದ ಮೇಲೆ
ನಾಳೆಯ ಬಸಿರಲಿ ಅಡಗಿಹ ಚಿಂತೆ
ಎದೆಯಿದು ಒರಟು, ಬುದ್ಧಿಯು ಬರಡು
ಕಾಯುವುದಾರಿಗೆ ಈಗಲೆ ಹೊರಡು
ಕತ್ತಲ ದಾರಿ, ಕಹಿ ಸಾಮಾನ್ಯ
ಪಾಡಿನ ಜಾಡಲಿ ಭಾವವು ಶೂನ್ಯ
ಬೆಳಗಿನ ಜಾವದ ಕನಸಿನ ತೆರದಲಿ
ಎಂದೋ ಮರೆತಿಹ ಹಾಡಿನಂದದಲಿ
ಮನವನು ಮೀಟುವ ನಿನ್ನಯ ಒಲವಿಗೆ
ಮಿಡಿಯಲು ನನ್ಸಲಿ ಹೃದಯವೇ ಇಲ್ಲ

Friday, February 28, 2020

ನೀನಿಲ್ಲದ ಹಾದಿ

ನೆನಪಿನ ದಳಗಳ ಬಣ್ಣ ನೀಲಿ. ನೀ ಬಿಟ್ಟ ನಿಟ್ಟುಸಿರಿನ ರಭಸಕ್ಕೆ ಹಾರಿ ಹೋದ ನೆನಪಿನ ಪಕಳೆಗಳಿಗೇನು ಗೊತ್ತು ಅವು ಉಳಿಸಿ ಹೋದ ಕಣ್ಣಂಚಿನ ಹನಿಗಳ ರುಚಿ.
ಕಣ್ಣ ಹನಿಗಳ ರುಚಿಯೇನೋ ಉಪ್ಪು. ನಿನ್ನ ಬಿಸಿ ಮುತ್ತು ತಾಗಿ ಮುಚ್ಚಿಯೇ ಸುಖಿಸಿದ ರೆಪ್ಪೆಗಳಿಗೇನು ಗೊತ್ತು ಅದರಿಂದ ಕಣ್ಣೀರೂ ಸಿಹಿಯಾಯಿತೆಂದು... 
ನೋವೊಂದು ಬೆಚ್ಚಗಿನ ಚಾದರವಿದ್ದಂತೆ. ನಿನ್ನ ಕನಸಿನ ಬಿಸಿ ಅಪ್ಪುಗೆಯೊಳಗೆ ಸಿಕ್ಕಿ ನಲುಗಿದ ಎದೆಯೊಳಗೆ ನೀನುಳಿಸಿ ಹೋದ ನೋವಿಗೇನು ಗೊತ್ತು, ಅದರ ವಾಸನೆ ಹಿತವಾಗಿದೆಯೆಂದು.
******
ನನ್ನ ಜೊತೆ ನೀ ನಡೆದ ಹಾದಿಯ ತಿರುಗಿ ನೋಡುವ ಯೋಚನೆಯೇ ನನ್ನೆದೆ ಬಡಿತದ ಹದ ತಪ್ಪಿಸುತ್ತದೆ... ನೀಲಿ ನೀಲಿಯ ಸಿಹಿಯಾದ ಹಿತವಾದ ನೆನಪುಗಳು ನೋವುಗಳು ಕಣ್ಣೀರುಗಳು ನಮ್ಮನ್ನ ತಡೆಯದಿರೆಂದು ಗೋಗರೆಯುತ್ತವೆ, ಮತ್ತು ಹರಳುಹರಳಾಗಿ ಉಳಿಯುತ್ತವೆ.

Saturday, February 1, 2020

ಕಡಲು ಮತ್ತೆ ರೆಕ್ಕೆ ಮುರಿದ ಹಕ್ಕಿ

ನೀ ಕೊಟ್ಟ ನೋವೆಲ್ಲ 
ಮನದ ಚಿಪ್ಪೊಳಗೆ ಕೂಡಿಟ್ಟು 
ಸ್ವಾತಿಯ ಮಳೆಗಾಗಿ ಕಾದೆ 
ಮಳೆ ಬೀಳಲಿಲ್ಲ, 
ಮುತ್ತು ಅರಳಲಿಲ್ಲ
*******
ಅಂದು ಹೊರಗೆ ಹುಣ್ಣಿಮೆ
ಒಳಗೂ ಹುಣ್ಣಿಮೆ
ನೋಡುತ್ತ ಮೈಮರೆತಿದ್ದೆವು
ಕಡಲ ಅಲೆಗಳ ನಾಟ್ಯ
ನನ್ನೊಳಗಿನ ಕಡಲಲ್ಲೂ
ಅಲೆಗಳ ಭೋರ್ಗರೆತ
ನಿನ್ನ ಮುಟ್ಟುವ ತವಕದ ಹೊರಳಾಟ
ಆದರೆ
ನನ್ನೆದೆಗೆ ನೀ ಕಿವಿಯಿಡಲಿಲ್ಲ
ಹಾಗಾಗಿ ನಿನಗದು ತಿಳಿಯಲೇ ಇಲ್ಲ
*******
You sat empty
And I remained dry
And the evening passed
With no high tides
And no high in heart
Where did love vanish?
******
ನೀ ಜತೆಗಿದ್ದರೆ ನನಗೆ
ನೀ ಏನೂ ಕುಡಿಸಬೇಕಿಲ್ಲ ಗೆಳೆಯ
ಯಾಕೆಂದರೆ
ನನಗೆ ನೀನೇ ಒಂದು
ಇಳಿಸಲಾಗದ ಅಮಲು
******
ಆದಿನ ನನ್ನ-ನಿನ್ನ ನಡುವೆ
ನಿಚ್ಚಳವಾಗಿತ್ತು ಗೋಡೆ
ಅದ ಹತ್ತಿ ಹಾರಿ
ನಿನ್ನಾಳಕ್ಕಿಳಿಯುವ ತವಕ
ಆದರೆ ಗೋಡೆ ದೊಡ್ಡದೇ ಇತ್ತು
ನನ್ನ ಎತ್ತರಕ್ಕೆ ನಿಲುಕದ್ದಾಗಿತ್ತು
ಕಷ್ಟಪಟ್ಟು ಹಾರಿದರೆ
ನಾ ಬೀಳಲೂಬಹುದು
ಆಗ ನನ್ನ ಎತ್ತುತ್ತಿದ್ದೆಯಾ ನೀನು
ಇಲ್ಲ ಕಾಲುಮುರಿದು ಬಿದ್ದವಳ
ಹಾಗೇ ಇರು ಅಂತ
ಬಿಟ್ಟು ಹೋಗುತ್ತಿದ್ದೆಯಾ
ತಿಳಿದಿರಲಿಲ್ಲ...
ಅದಕ್ಕೇ ಗೋಡೆ ದಾಟಿರಲಿಲ್ಲ ಗೆಳೆಯ.
ಇಂದು ಹೀಗೆ ಅಚಾನಕ್ ಗೋಡೆ ದಾಟಿ
ಕಾಲು ಮುರಿದು ರೆಕ್ಕೆ ಮುರಿದು
ಬಿಕ್ಕುತ್ತಿರುವ ಈ ದಿವಸ...
ನೀನೆಲ್ಲಿ, ನಿನ್ನಾಳವೆಲ್ಲಿದೆಯೆಂದು
ಇನ್ನೂ ತಿಳಿದಿಲ್ಲ.
******

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Saturday, June 30, 2018

ಚಹಾ ಕಾಫಿ ಮತ್ತು ಪರಮಾತ್ಮ

ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ
ಕುಡಿದು ಕುಡಿದು ವಾಡಿಕೆ
ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ
ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು
ಬೆರಗಾಗುತ್ತಿದ್ದೆ, ಆಹಾ ಏನು ರುಚೀ...
ಅದೇನೋ ಮ್ಯಾಜಿಕ್, 

ಮಾಡುವ ಗುಟ್ಟು ಮಾತ್ರ ಕೈಗೆಟುಕದು
ಆಮೇಲೊಂದು ದಿನ
ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ...
ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ
ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ
ಮೇಲಿನ ಮಾಳಿಗೆಗೆ ಕಾಫಿಫುಡಿ ಸುರಿದು
ಕುದಿನೀರುಹಾಕಿ ಕೆಳಮಾಳಿಗೆಯಿಂದ ಡಿಕಾಕ್ಷನ್ ಇಳಿಸಿ
ಹಾಲುಸಕ್ಕರೆ ಬೆರೆಸಿ ಕೊಟ್ಟ ಕಾಫಿ
ಕುಡಿದಾಗಲೇ ಗೊತ್ತಾಗಿದ್ದು,
ಇದೇ ನಿಜವಾದ ಕಾಫಿ ಅಂತ...
ಅದನ್ನೂ ಮಾಡಲು ಕಲಿತು
ಬೇರೆಬೇರೆ ಪುಡಿಯಲ್ಲಿ ಪ್ರಯೋಗ ಮಾಡಿ
ವಿಧವಿಧದ ಫಿಲ್ಟರುಗಳು ಹಾಕಿ
ರುಚಿರುಚಿಯಾಗಿ ಕಪ್ ಗಟ್ಟಲೆ ಮಾಡಿ ಕುಡಿಕುಡಿದು
ಎಲ್ಲಾ ನಡೆಯುತ್ತಿರುವಾಗಲೇ
ಹೆತ್ತೂರು ಬಾ ಅನ್ನುತ್ತದೆ
ಅಲ್ಲಿ ಸ್ವಾಗತಿಸುತ್ತದೆ ಅದೇ ಅಮ್ಮ ಮಾಡುವ ಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ...
ಇತ್ತೀಚೆಗೆ ನನಗೊಂದು ಸಂಶಯ
ನಾನು ಬೆಂಗಳೂರಿಗೆ ಬಂದು
ಬಾಯಿರುಚಿಗೆ ಸೋತು ಸಂಪ್ರದಾಯ ಮರೆತೆನೇ?
ನನ್ನ ಮೇಲೆ ಫಿಲ್ಟರ್ ಕಾಫಿ ಹೇರಿಕೆಯಾಯಿತೇ?
ಯಾವ ಕಾಫಿ ನಿಜವಾದ ಕಾಫಿ,
ಅಮ್ಮ ಕಲಿಸಿದ್ದೇ ಅಲ್ಲ ಬೆಂಗಳೂರು ಹುಚ್ಚುಹಿಡಿಸಿದ್ದೇ?
ರುಚಿ ಕಮ್ಮಿಯಿದ್ದರೂ ಹುಟ್ಟು ಸಂಪ್ರದಾಯ ಉಳಿಸಲೇ
ಅಥವಾ ಇದು ಬೆಂಗಳೂರು -

ಇಲ್ಲಿ ನಾನು ಬೆಂಗಳೂರಿಗಳಾಗಿರುತ್ತೇನೆಂದುಕೊಳ್ಳಲೇ?
**************
ಪರಮಾತ್ಮ

ನೀವೂ ಬಸಿದುಕೊಳ್ಳುತ್ತೀರಿ
ನಾನೂ ಬಸಿದುಕೊಳ್ಳುತ್ತೇನೆ
ಇಷ್ಟೇ ನನ್ನ-ನಿಮ್ಮ ಹೋಲಿಕೆ
ಉಳಿದಿದ್ದು ಪಕ್ವವಾಗುವಿಕೆಯ ಕಥೆ
ನೀವು ಬೆಂಕಿಯಲ್ಲಿ ಕಾಯುವವರು
ನಾನು ಕಾಯುವುದು ಕಾಲಕ್ಕೆ
ನಿಮಗೋಸ್ಕರ ಕಷ್ಟ ಪಟ್ಟು ಕಾಯುವವರು
ನನಗಾಗಿ ಕಾಯುತ್ತಾರೆ ಇಷ್ಟಪಟ್ಟು
ಯಾಕಂದರೆ ಕಾಯುವಿಕೆಯೊಂದು ಧ್ಯಾನ
ಕಾದಷ್ಟು ಖುಷಿ ಕೊಡುತ್ತಾನೆ ಪರಮಾತ್ಮ
ನೀವಿಳಿದ ಗಂಟಲೇನೋ ಬೆಚ್ಚಬೆಚ್ಚಗೆ, ನಿಜ
ಆದರೆ ನಾನಿಳಿದಾಗ ಬೆಚ್ಚಗಾಗುವುದು ಆತ್ಮ
ನೀವು 'ಫಿಲ್ಟರ್' ರುಚಿಕೊಟ್ಟು ಸೊಕ್ಕಿಸಿದ
ನಾಲಿಗೆಯ ಫಿಲ್ಟರ್ ನಾ ಕಳಚುತ್ತೇನೆ,
ಹೃದಯದ ಕೀಲಿ ತೆರೆಯುತ್ತೇನೆ
ನೀವು ಸುಖದ, ಸಂತೋಷದ ಸಂಕೇತ,
ನಾನು ದುಃಖದ ಸಂಗಾತಿ, ಕಣ್ಣೀರಿನ ಗೆಳತಿ
ಯಾವಾಗಲೂ ಎಷ್ಟೆಂದು ಎಚ್ಚರಿರುತ್ತಾರೆ ಜನ
ಅವರಿಗೂ ಬೇಕು ಆಗಾಗ ಹೆಜ್ಜೆತಪ್ಪುವ ಸ್ವಾತಂತ್ರ್ಯ
ವಾಸನೆಗೆ ಮರುಳಾಗುವ, ಬೀಳುವ ಅವಕಾಶ
ಕಾವು ಕಳೆದು ಎಲ್ಲ ಮರೆತು
ತಣ್ಣಗೆ ಮಲಗುವ ಪರಮಸುಖ...
ನಾನೆಂದರೆ ಚಹಾ-ಕಾಫಿ-ಹಾಲುಗಳಲ್ಲಿ ಸಿಗದ
ಅತ್ಯಗತ್ಯದ ಜಾರುವ ಅನುಕೂಲ

===
30 June 2017ರಂದು ಅಚಾನಕ್ ಫೇಸ್ಬುಕ್ಕಿನಲ್ಲಿ ಚಹಾಕಾಫಿ ಕವಿತೆಗಳ ಸುರಿಮಳೆಯಾಗಲಾರಂಭಿಸಿತು. ಅವಾಗ ಬರೆದಿದ್ದು.


Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ,  ಸಿಕ್ಕ ಪಾಲು ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಯೋಗವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬಿದ್ದ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)

Friday, November 1, 2013

ಮತ್ತೆ ಕಾಡಿದ ಸತ್ಯ...

ಬಿಸಿ ಹಬೆ ಸುತ್ತ ತುಂಬಿದಾಗ
ಮಸುಕಾಗುತ್ತದೆ ಮನದ ಕನ್ನಡಿ
ಬಿಸಿ ತಣಿಸಿ ಮಸುಕು ತಿಳಿಯಾಗಿಸಬೇಕು -
ಇಲ್ಲ, ಕನ್ನಡಿ ನೋಡುವ ಹುಚ್ಚು ಬಿಡಬೇಕು...

*********

ಮಸುಕು ತಣಿಯದ ಮನಕೆ
ನೀನಾರೆಂದು ಕೇಳಿದರೆ
ಕನ್ನಡಿಗೆ ಉತ್ತರ ಹೇಳಲು ತಿಳಿದೀತೆ,
ಕಾಣುವ ಮಸುಕೇ ಸತ್ಯವಾಗುತ್ತದೆ,
ನಿಜವಾದ ಸತ್ಯ ಕಾಣುವುದು ಸುಲಭವಲ್ಲ.

***********

ಅಸಲು, ಈ 'ಸತ್ಯ' ಅಂದರೇನು?
ಅವರವರ ಭಾವಕ್ಕೆ ಅವರವರ ಬುದ್ಧಿಗೆ
ನಿಲುಕುವುದಷ್ಟೇ ಸತ್ಯ
ಉಳಿದಿದ್ದು ಮಿಥ್ಯ....
ನಾವು ನೋಡಬಯಸಿದ್ಧಷ್ಟೇ ಸತ್ಯ
ನಮಗಿಷ್ಟವಿಲ್ಲದ್ದು ಮಿಥ್ಯ....
ಸಂತೋಷ ಕೊಡುವುದು ಸತ್ಯ...
ದು:ಖ ಕೊಟ್ಟಲ್ಲಿ ಮಿಥ್ಯ...

************

ಮಿಥ್ಯವೂ ಬೇಕಲ್ಲವೇ ಜೀವನಕ್ಕೆ?
ಬದುಕು ಸಹನೀಯವಾಗಲಿಕ್ಕೆ
ಸತ್ಯದ ಸಾಂಗತ್ಯ ಬೆಂಕಿಯಿದ್ದಂತಲ್ಲವೇ?
ಬೆಂಕಿಯೊಳಗಿದ್ದೂ ಬಿಸಿಯಾಗದೆ ಬದುಕುವುದು
ಸಾಧ್ಯವಾ?

*************

ಬಿಸಿಯಾದರೆ ಮತ್ತೆ ಕನ್ನಡಿ ಮಸುಕು...
ಮತ್ತದೇ ಚಕ್ರದ ಆವರ್ತನ...!

Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Wednesday, May 13, 2009

ನೀರಿಲ್ಲ, ಮಾತಿಲ್ಲ

ಇಲ್ಲ
ಎತ್ತೆತ್ತ ನೋಡಿದರೂ ನೀರೇ ನೀರು... ಆದರೆ, ನನಗೆ ಕುಡಿಯಲಿಕ್ಕೆ ಗುಟುಕು ನೀರಿಲ್ಲ.
ಸುತ್ತಲಿರುವುದು ಬಲುದೊಡ್ಡದಾದ ಸಮುದ್ರ... ಉಪ್ಪುನೀರು, ಎಷ್ಟಿದ್ದರೇನು, ಬಾಯಾರಿಕೆ ಹಿಂಗೀತೇ?

---------

ಮಾತು
ಹೋಗಬೇಕಾದ ದಾರಿಯಿನ್ನೂ ಬಲುದೂರ ಬಾಕಿಯುಳಿದಿದೆ.  ಮಾತಾಡಿದ್ದು ಹೆಚ್ಚೇನಿಲ್ಲ, ಆದರೆ ಮನಸೆಲ್ಲ ಖಾಲಿಯಾಗಿದೆ, ಮಾತು ಮುಗಿದುಹೋಗಿದೆ. ಮೌನದಲ್ಲಿ ಮಾತಾಡುವಾತ ನೀನಲ್ಲದಿರುವಾಗ, ಇನ್ನುಳಿದ ದೂರ ಮೌನದಲ್ಲಿ ಹೇಗೆ ಕ್ರಮಿಸಲಿ?

Monday, February 2, 2009

ಸತ್ಯ...

ಸತ್ಯ ಅಮೀಬದಂತೆ...
ಇಂದಿಗೊಂದು ಆಕಾರ
ನಾಳೆಗಿನ್ನೊಂದೇ ಆಕಾರ
ಈ ಕ್ಷಣಕ್ಕೆ ಸತ್ಯವಾಗಿದ್ದು 
ಮುಂದಿನ ಕ್ಷಣಕ್ಕೆ ಸುಳ್ಳಾಗಬಹುದು
ನಾಳೆಯ ಸತ್ಯ 
ಇಂದಿಗೆ ಸುಳ್ಳಾಗಬಹುದು

ಸತ್ಯ ವಿಶ್ವರೂಪಿ
ಸಾವಿರ ಮುಖಗಳ ಕಾಮರೂಪಿ
ಅವರವರ ಭಾವಕ್ಕೆ 
ಅವರದೇ ಸತ್ಯಗಳು
ಭಾವ-ಬುದ್ಧಿಗೆ ನಿಲುಕದ 
ಇನ್ನೆಷ್ಟೋ ಸತ್ಯಗಳು
ಶಾಶ್ವತ ಸತ್ಯಕ್ಕೆ ಅರಸಿದರೆ
ಎಲ್ಲವೂ ಶಾಶ್ವತವೆನಿಸಬಹುದು!
ಒಂದು ಸತ್ಯವ ಹುಡುಕಿ ಹೊರಟಾಗ
ದಾರಿಯಲಿ ನೂರಾರು ಸತ್ಯಗಳು
ಕೈಬೀಸಿ ಕರೆದಾವು!
ಹುಡುಕುವ ಸತ್ಯ ಮಾತ್ರ ಸಿಗದಾಗಬಹುದು...
ಸುಳ್ಳೆಂಬುದೇ ಇಲ್ಲವಾಗಿ
ಸರ್ವವೂ ಸತ್ಯವಾದೀತು...
ಸತ್ಯದ ಜಾಡು ಹುಡುಕಿ ಹೊರಟಲ್ಲಿ
ಹಾದಿ ಮರೆತು ಜಾಡು ತಪ್ಪಿ 
ನಾವೇ ಕಳೆದುಹೋದೇವು!

ಅಷ್ಟೇನಾ?

ಹೀಗೂ ಆಗುವುದುಂಟು ಹುಡುಗೀ...

ಸತ್ಯಶೋಧನೆಗಾಗಿ 
ಶಬ್ದಗಳ ಕತ್ತರಿಸಿ ಕತ್ತರಿಸಿ
ಅರ್ಥ ಹುಡುಕುತ್ತೇವೆ..
ಕ್ರಿಯೆಗಳ ಕತ್ತು ಕುಯ್ದು
ಅದರಲ್ಲೂ ಅರ್ಥ ಅರಸುತ್ತೇವೆ...
ಪ್ರತಿಕ್ರಿಯೆಗಳಿಗೆ ಕಾಯುತ್ತೇವೆ,
ಅದರಲ್ಲೂ ಅರ್ಥ ಕಾಣುತ್ತೇವೆ...
ಆದರೆ, 
ಇಂದಿಗೆ ಅರ್ಥವಾಗಿದ್ದು 
ನಾಳೆಗೆ ಬಿಡಿಸಲಾಗದ ಕಗ್ಗಂಟಾಗಿ
ಕಗ್ಗಂಟೇ ಪರಮಸತ್ಯವಾಗುವುದು -

ಸತ್ಯಕ್ಕೆ ಅರ್ಥ ಹುಡುಕಹೊರಟಾಗ
ನೂರೆಂಟು ಅರ್ಥಗಳು ಹೊಳೆದು 
ಅಸಲಿ ಸತ್ಯವೆಲ್ಲೋ ಕಳೆದುಹೋಗುವುದು -

ಕಳೆದುಹೋದ ಸತ್ಯವ 
ಮತ್ತೆ ಹುಡುಕಹೊರಟಾಗ
ಏನೇನೂ ಸಿಗದೆ 
ಶೂನ್ಯವೇ ಪರಮಸತ್ಯವಾಗುವುದು!


Friday, December 12, 2008

......


ಮೊಗತುಂಬಿದ ಗತ್ತು ಕರಗಿಸಿ
ನಗುವಿನ ಮುಖವಾಡ ಸರಿಸುತ್ತ
ಖಾಲಿಖಾಲಿಯ ಹೊತ್ತುಬರುವ
ನೀಲಿನೀಲಿಯ ಈ ಹೊತ್ತು
ನೀ ನನ್ನೊಡನಿರಬೇಕಿತ್ತು...

ನಾನಲ್ಲದ ನಾನು
ನನ್ನಿಂದ ಹೊರಬಂದು
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು...

ಮನತುಂಬಿದ ಸೊನ್ನೆಗೆ ಅರಿವಿದೆ
ಕಣ್ಣಂಚಲರಳಿದ ಹನಿಗೆ ಅನಿಸಿದೆ
ಸೋಗಲಾಡಿ ನಗುವಿಗೂ ಬೇಕಿದೆ

ನೀನಿದ್ದರೆ ಚೆನ್ನಾಗಿತ್ತು...
ನೀನಿರಬೇಕಿತ್ತು...

ನೀ ನನ್ನೊಡನಿರಬೇಕಿತ್ತು...

Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

Thursday, June 12, 2008

ಕರಿಪರದೆ...

ಬಾನ ಕವಿದಿದೆ ಮುಗಿಲು
ಕತ್ತಲಾಗಿದೆ ಹಗಲು

ಬೆಳಕು ಕಾಣದ ಬದುಕು
ದಾರಿ ಮುಚ್ಚಿದೆ ಮುಸುಕು

ಮನಸಿನೊಳಗಿನ ಮುನಿಸು
ಸುಟ್ಟುಬಿಟ್ಟಿದೆ ಕನಸು...

Saturday, February 16, 2008

ಎರಡು ಹನಿಗಳು...

*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ

ಕೊನೆಯದಾಗಿ ಕೇಳಿದ್ದು
ನಿನ್ನನ್ನು...

ಕೇಳದೆ ಇದ್ದಿದ್ದು
ನಿನ್ನನ್ನು...

***************************

ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ

ಕೋಮಾದೊಡನೆ
ಮುಂದೆ ಹೋಗಲೇ ಬೇಕು

ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************