Sunday, November 9, 2008

ನಂಗೆ ಖುಷಿಯಾಗಿದೆ...! :-)


ವೀರಪ್ಪನ್-ಗೆ ಆನೆಕಳ್ಳ, ದಂತಚೋರ ಇತ್ಯಾದಿ ಬಿರುದುಗಳಿಟ್ಟು ಆತನನ್ನು ಕಳ್ಳರ ಕಳ್ಳನಾಗಿ, ಮಹಾಖದೀಮನಾಗಿ ಮಾಡಿದ್ದರಲ್ಲಿ ಮಾಧ್ಯಮಗಳ ಪಾಲೂ ಇದೆ ಎಂದರೆ ಒಪ್ಪತಕ್ಕಂಥ ಮಾತು. ಅದಕ್ಕೆ ನೂರು ಕಾರಣಗಳಿದ್ದಿರಬಹುದು, ಅದು ಬೇರೆ ಮಾತು. ಆದರೆ, ಗೊತ್ತಿದ್ದವರಿಗೆ ಗೊತ್ತಿರುತ್ತದೆ, ವೀರಪ್ಪನ್ ಹೆಸರಲ್ಲಿ ಆನೆ ಕೊಲ್ಲುತ್ತಿದ್ದವರು ಯಾರು ಅಂತ. ವೀರಪ್ಪನ್ ಆನೆ ಕೊಂದೇ ಇಲ್ಲ ಅಂತಲ್ಲ, ಆದ್ರೆ ಸತ್ತ ಎಲ್ಲಾ ಆನೆಗಳೂ ವೀರಪ್ಪನ್ ಕೈಲಿ ಸಾಯಲಿಲ್ಲ ಅನ್ನುವುದು ಹಸಿ ಹಸಿ ಸತ್ಯ.

ತಂತಿಬೇಲಿಗೆ ಹೈ ವೋಲ್ಟೇಜ್ ವಿದ್ಯುತ್ ಹಾಯಿಸಿಡುವುದು ರೈತರು ಆನೆ ನಿಗ್ರಹಕ್ಕೆ ಕಂಡುಕೊಂಡ ಉಪಾಯ. ಅದಕ್ಕೆ ತಾಗಿ ಆನೆಯೇನಾದರೂ ಸತ್ತರೆ, ಅದಕ್ಕೆ ಊದುಬತ್ತಿ, ಗಂಧ, ಅರಿಶಿನ, ಹೂವು ಇತ್ಯಾದಿ ಹಾಕಿ ಪೂಜೆ ಮಾಡಿ ಅದನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳುವ ರೂಢಿ ಕೂಡ ಕೆಲವು ಊರುಗಳಲ್ಲಿ ಇದೆ.

ಹೀಗೆ ಅಲ್ಲಲ್ಲಿ ಆಗಾಗ ನಡೆದ ಆನೆಗಳ ಸಾವುಗಳನ್ನು ವರದಿ ಮಾಡುವ ಮೂಲಕ ಮಾಧ್ಯಮಗಳು ಒಳ್ಳೆ ಕೆಲಸ ಮಾಡಿವೆ. ಮಾರುಕಟ್ಟೆಯ ಓಟದ ರಭಸದ ನಡುವೆ ಪರಿಸರದ ಬಗೆಗೆ ನಿಜವಾದ ಅರಿವು ಮಾಧ್ಯಮಗಳಲ್ಲಿ ಮಾಯವಾಗುತ್ತಿರುವ ಈ ದಿನಗಳಲ್ಲಿ ಕೂಡ, ತಾವು ಮಾಡುತ್ತಿರುವ ಕೆಲಸ ಎಷ್ಟು ದೊಡ್ಡದು ಅಂತ ಕೆಲವರಿಗೆ ಗೊತ್ತಿದ್ದು ಮಾಡಿದರೆ ಇನ್ನು ಕೆಲವರು ಗೊತ್ತಿಲ್ಲದೆಯೂ ಮಾಡಿದ್ದಾರೆ, ಆದರೆ ಹೆಚ್ಚುಕಡಿಮೆ ಎಲ್ಲಾ ಪತ್ರಿಕೆಗಳು ಮತ್ತು ಖಾಸಗಿ ವಾಹಿನಿಗಳ ಸುದ್ದಿಗಳೂ ಆನೆಗಳ ಸಾವಿನ ಬಗ್ಗೆ ಎಲ್ಲರಿಗೂ ಗೊತ್ತಾಗುವ ಹಾಗೆ ಮಾಡಿದ್ದಾರೆ ಅನ್ನುವುದು ಮುಖ್ಯ.ಅಷ್ಟೆಲ್ಲ ವರದಿಗಳು ಬರ್ತಾ ಇದ್ದರೂ ದಪ್ಪ ಚರ್ಮದ ಅರಣ್ಯ ಇಲಾಖೆ ಮಾತ್ರ ತೆಪ್ಪಗೆ ಕೂತಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಆನೆಗಳ ಸಾವಿನ ಬಗ್ಗೆ ಮಾಧ್ಯಮಗಳ ವರದಿಗಳನ್ನು ಆಧರಿಸಿ, suo motu ಆಗಿ, ಅಂದರೆ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಅರಣ್ಯ ಇಲಾಖೆಗೆ ನೋಟಿಸ್ ನೀಡಿದೆ. ಮಾಧ್ಯಮಗಳ ಗುಣಮಟ್ಟದ ಬಗ್ಗೆ HOPE ಕಳೆದುಕೊಂಡವರಿಗೆಲ್ಲ ಇದೊಂದು ಬೆಳಕಿನ ಕಿರಣ... ಒಳ್ಳೆಯ ಉದ್ದೇಶಗಳಿಗೆ ಸಿಗಬೇಕಾದ ಗೌರವವನ್ನು ಎತ್ತಿಹಿಡಿದ ಹೈಕೋರ್ಟಿನ ಈ ಕ್ರಮದಿಂದ ನನಗಂತೂ ತುಂಬಾ ಖುಷಿಯಾಗಿದೆ. ಪಿ.ಡಿ.ದಿನಕರನ್ ಅವರನ್ನು ದೇವರು ನೂರು ವರ್ಷ ಚೆನ್ನಾಗಿಟ್ಟಿರಲಿ.

ಇಲ್ಲಿವರೆಗೆ ತಣ್ಣಗಿದ್ದ ಅರಣ್ಯ ಇಲಾಖೆಗೂ ಇದರಿಂದ ಚೂರು ಬಿಸಿ ಮುಟ್ಟಿದೆ. "ಡೀಪ್ ಫಾರೆಸ್ಟ್ ಜಾಸ್ತಿ ಆಗಿ ಆನೆಗಳಿಗೆ ಅಲ್ಲಿ ಹೊಟ್ಟೆಗೆ ಸರಿಯಾಗಿ ಸಿಗದೆ ನಾಡಿಗೆ ಬರ್ತಾ ಇವೆ", "ಆನೆಗಳ ಸಂಖ್ಯೆ ಜಾಸ್ತಿ ಆಗಿದೆ" "ಹೊಲಕ್ಕೆ ನುಗ್ಗುವುದು ಕಂಟ್ರೋಲ್ ಮಾಡಲಿಕ್ಕೆ ಬೇಕಾದಷ್ಟು ಸಿಬ್ಬಂದಿ ಇಲ್ಲ" ಇತ್ಯಾದಿ ಆನೆಗಳು ನಾಡಿಗೆ ನುಗ್ಗುವುದಕ್ಕೆ ಮತ್ತು ಅವುಗಳ ಸಾವಿಗೆ ಅರಣ್ಯ ಇಲಾಖೆ ಹೇಳುವ ಕಾರಣಗಳು. ಈಗ plan of action ತಯಾರಿಸಿ ಆನೆಗಳನ್ನು ಉಳಿಸುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಕೆಲವು ದಿನಕ್ಕೊಂದರಂತೆಯಾದರೂ ಕಳೆದ ಕೆಲ ತಿಂಗಳುಗಳಿಂದ ಪದೇ ಪದೇ ಬರುತ್ತಿರುವ ಆತಂಕಕಾರಿ ಸುದ್ದಿ ಇನ್ನೊಂದಿದೆ. ಇತ್ತೀಚೆಗೆ ಚಿಕ್ಕಮಗಳೂರು, ಮಂಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ, ಅಷ್ಟ್ಯಾಕೆ, ಬೆಂಗಳೂರಲ್ಲಿ ಕೂಡ ಜಿಂಕೆ ಚರ್ಮ, ಚಿರತೆ ಚರ್ಮ, ಹುಲಿಯುಗುರು ಇತ್ಯಾದಿ ಮಾರುತ್ತ ಸಿಕ್ಕಿಬಿದ್ದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೊಲೀಸರಿಗೆ ಸಿಕ್ಕಿಬೀಳುವವರೇ ಇಷ್ಟೊಂದು ಮಂದಿಯಾದರೆ, ಸಿಕ್ಕಿಬೀಳದವರು ಇನ್ನೆಷ್ಟಿದ್ದಾರೋ? ಪೊಲೀಸರಿಗೆ ಕೊಲೆಗಾರರು ಸಿಕ್ಕಿದರೂ ಸಿಗದಿದ್ದರೂ, ಒಂದು ಸಾರಿ ಸತ್ತ ಪ್ರಾಣಿ ಮತ್ತೆ ಬದುಕದು, ಪೊಲೀಸರು ಯಾರನ್ನು ಹಿಡಿದು ಏನು ಪ್ರಯೋಜನ?

ಹಾಗೆಯೇ, ಗದಗ, ಚಿತ್ರದುರ್ಗ, ಉತ್ತರಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಚಿರತೆ, ಜಿಂಕೆ ಇತ್ಯಾದಿಗಳು ಕಾಡು ಬಿಟ್ಟು ನಾಡಿಗೆ ಬಂದು ಜನರಲ್ಲಿ ಭಯವುಂಟುಮಾಡಿದ ಪ್ರಕರಣಗಳು ಕೂಡ ಬಹಳಷ್ಟಿವೆ. ಕೆಲವು ಕಡೆ ಇಂಥ ಪ್ರಾಣಿಗಳು ಸತ್ತು ಹೋಗಿದ್ದೂ ಇದೆ. ಇಂತಹ ಪ್ರಕರಣಗಳು ಸಿಕ್ಕಿದಾಗಲೆಲ್ಲ ಅದನ್ನು ಇಟ್ಟುಕೊಂಡು ಅರ್ಧರ್ಧ ಗಂಟೆ ಸುದ್ದಿ ಕೊಡುವ ಕನ್ನಡದ ಸುದ್ದಿವಾಹಿನಿಗಳಲ್ಲಿ, ಹೀಗೆ ಯಾಕೆ ಕಾಡುಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದರ ಬಗ್ಗೆ ಸರಿಯಾದ, ಮನಮುಟ್ಟುವ ವಿಶ್ಲೇಷಣೆ ಕೊಟ್ಟು, ಮನುಷ್ಯರದೂ ಅದರಲ್ಲಿ ತಪ್ಪಿದೆ ಅಂತ ಹೇಳುವ ಗಟ್ಟಿತನದ ಕೊರತೆಯಿದೆ. ಇದನ್ನು ಸರಿಪಡಿಸಿಕೊಂಡಲ್ಲಿ ಸುದ್ದಿವಾಹಿನಿಗಳ ಗುಣಮಟ್ಟ ಇನ್ನಷ್ಟು ಹೆಚ್ಚುತ್ತದೆ.

ಆನೆಗಳ ಸಾವಿನ ಬಗ್ಗೆ ಕಾರಣಗಳನ್ನು ಹುಡುಕಿಕೊಂಡಿರುವ ಅರಣ್ಯ ಇಲಾಖೆ ತಕ್ಷಣಕ್ಕೆ ಬಚಾವಾಗಿದೆ. ಹೆಚ್ಚಿನ ಮಾಧ್ಯಮಗಳು ಅರಣ್ಯ ಇಲಾಖೆಯ ಪ್ರಮುಖ ಅಧಿಕಾರಿಗಳನ್ನು ಈ ಬಗ್ಗೆ ನೇರವಾಗಿ ಪ್ರಶ್ನಿಸಿಲ್ಲ. ಅರಣ್ಯ ಇಲಾಖೆ ತನ್ನಲ್ಲಿರುವ ಕಾರಣಗಳನ್ನು ಕೊಟ್ಟು ಹೈಕೋರ್ಟಿನಿಂದಲೂ ಬಚಾವಾಗಬಹುದು, ಹೇಳಲಾಗದು. ಜಿಂಕೆ, ಚಿರತೆ ಇತ್ಯಾದಿ ಪ್ರಾಣಿಗಳ ಕೊಲೆಗಳ ಬಗ್ಗೆ ಯಾರೂ ಇನ್ನೂ ಏನೂ ಪ್ರಶ್ನೆ ಎತ್ತಿಲ್ಲ. ಯಾರು ಕೇಳಬೇಕು, ಯಾರು ಕೇಳುತ್ತಾರೆ ಅನ್ನುವುದೂ ಗೊತ್ತಿಲ್ಲ. ಒಂದು ವೇಳೆ ಯಾರಾದರೂ ಕೇಳಿದರೆ ಅರಣ್ಯ ಇಲಾಖೆ ಏನು ಉತ್ತರ ಕೊಡುತ್ತದೆಯೋ ಗೊತ್ತಿಲ್ಲ.

ಅರಣ್ಯ ಇಲಾಖೆಯೊಳಗೆ ಮತ್ತು ಹೊರಗೆ ಇರುವ ಹೆಗ್ಗಣಗಳ ನಿಗ್ರಹ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆಗದಂತೆ ತಡೆಯುವುದು, ಅರಣ್ಯ ಪ್ರದೇಶ ನಿಜವಾಗಿಯೂ ಹೆಚ್ಚುವಂತೆ ಮಾಡುವುದು, ಇವೆಲ್ಲ ಸಾಧ್ಯವಾದರೆ ಎಲ್ಲಾ ಅಕ್ರಮಗಳು ಕಡಿಮೆಯಾಗಬಹುದು... ಇವೆಲ್ಲವನ್ನೂ ಸಾಧ್ಯಮಾಡಿ, ನಮಗೆಲ್ಲ LIVE-AND LET LIVE ಪಾಠ ಕಲಿಸುವ ಸೂಪರ್ ಮ್ಯಾನ್ ಯಾರಾದ್ರೂ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ನನ್ನದೊಂದು ಕನಸು... ಮತ್ತು ನಮಗೆಲ್ಲಾ ಒಳ್ಳೆ ಬುದ್ಧಿ ಆದಷ್ಟು ಬೇಗ ಬರಲಿ ಅಂತ ಹಾರೈಕೆ...

7 comments:

ಗಿರೀಶ್ ರಾವ್, ಎಚ್ (ಜೋಗಿ) said...

NIce
-jogi

giri said...

I Share your thoughts

ವಿ.ರಾ.ಹೆ. said...

yes, true..

thanx shree.

ಹರೀಶ ಮಾಂಬಾಡಿ said...

ಕೊಡಗಿನಲ್ಲಿ ಆನೆ, ಹುಲಿಗಳು ಊರಿಗೆ ಬಂದು ಬೆಳೆನಾಶ ಮಾಡಿ ಇಡೀ ವರ್ಷದ ದುಡಿಮೆಯನ್ನೇ ಮಣ್ಣುಪಾಲು ಮಾಡುತ್ತವೆ. ಹೀಗಾಗಿ ಅಲ್ಲಿನವರು ಆ ಪ್ರಾಣಿಗಳು ಒಂದೋ ಸಾಯಬೇಕು ಇಲ್ಲ, ಅರಣ್ಯ ಇಲಾಖೆ ನಿಯಂತ್ರಿಸಬೇಕು ಎಂಬ ಬೇಡಿಕೆ ಇಟ್ಟಿರುವುದು ವಾಸ್ತವ. ನಮಗೆ ಕಾಡುಜೀವಿಗಳೂ ಬೇಕು. ನಾಡಿನ ಜೀವಿಗಳೂ. ಹೀಗಾಗಿ ವನ್ಯಜೀವಿಗಳನ್ನು ಕೊಲ್ಲದೇ ನಿಯಂತ್ರಿಸಲು ಮುಕ್ತ ಸಂವಾದವೇ ಆಗಬೇಕು.

Harisha - ಹರೀಶ said...

ಪ್ರಾಣಿಗಳ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು ಗೊತ್ತೇ ಇರಲಿಲ್ಲ! ಧನ್ಯವಾದಗಳು :-)

Anonymous said...

ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
http://www.interiordesignersbangalore.com
http://www.interiordesignersinbangalore.com
http://www.architectsbangalore.com
http://www.seekangroup.com
http://www.architectsban.webs.com

Anonymous said...

http://www.architectsban.webs.com architectural firms architectural design interior design design building design firm building architects landscape architects project building planning firm architects design architectural designers architectural firm architects housing architects plans residential design architecture building building designer architecture building design residential http://www.seekangroup.com designer buildings residential landscape architects architects homes find architects architectural company local architects sustainable design building planner interior designers residential architectural plans floor plans interior green design landscape house reconstruction design build firms plans planning architectural construction house designer house design building planning modern http://www.interiordesignersbangalore.com/" Architects in Bangalore Interior Designers In Bangalore Architect in Bangalore interior Designer in Bangalore Construction Residential Architects Home House Architecture Design http://www.architectsbangalore.com Bangalore Architects Bangalore Home House Plans Estimate Construction, Architects in Bangalore Home Residential House Commercial Residential Architects in Bangalore Interior Designers in Bangalore Construction Services Bangalore Architects list of Architects in Bangalore house Home Plans Design Estimate and Construction Services, Architectural firms http://www.interiordesignersinbangalore.com designer buildings Residential landscape Architects Architects homes find architects architectural company local architects sustainable design building planner interior designers residential architectural plans floor plans interior green design landscape House Reconstruction design Build firms plans planning Architectural construction house designer house, design building planning modern http://www.seekangroup.com/home