Tuesday, January 16, 2007

ಮನಸು ಏಕಾಂಗಿಯಾದಾಗ...

ಮನಸು ಏಕಾಂಗಿಯಾದಾಗ
ಕಣ್ಣುಗಳೆರಡೂ ಮುಚ್ಚಿಕೋ ಗೆಳೆಯಾ...
ನಿನ್ನ ಮನದ ಬಲು ಸನಿಹವಿದ್ದು,
ನಿನಗೆ ಒಳಿತಾಗಲೆ೦ದು ಬಯಸುವ
ಈ ಬೆಚ್ಚನೆಯ ಅನುಭೂತಿಯ
ಅನುಭವ ನಿನಗಾದರೆ
ಅದಕ್ಕಿಂತ ಬೇರೇನು ಬೇಕು?
ಬದುಕು ಮೊಗೆದು ಕೊಟ್ಟಿದ್ದು
ನೀನು-ನಾನು ಪಡಕೊಂಡಿದ್ದು
ಎಲ್ಲವೂ ಸುಂದರ ಅನುಭೂತಿ...
ಉಳಿಯುವುದೂ ಅನುಭೂತಿ.

5 comments:

ರಾಧಾಕೃಷ್ಣ ಆನೆಗುಂಡಿ. said...

ಏಕಾಂಗಿತನ, ಒಂಟಿತನದಿಂದ ದೂರಬರಲು ಸಾಧ್ಯ ಇಲ್ಲವೇ.

Shree said...

ಇದೆ... ಆದರೆ ಮನದೊಳಗೆ ಅಷ್ಟು ಧೈರ್ಯ, ಛಲ, ವಿಶ್ವಾಸ ಇರಬೇಕು.. and, Time is the healer but it heals faster if some one cares!!!

Unknown said...

Hey ಶ್ರೀ,
ನನಗೆ ಇದು ತು೦ಬಾ ಇಷ್ಟ ಆಯ್ತು.
"ಬದುಕು ಮೊಗೆದು ಕೊಟ್ಟಿದ್ದು,
ನಾನು-ನಾನು ಪಡಕೊ೦ಡಿದ್ದು
ಎಲ್ಲವೂ ಸು೦ದರ ಅನುಭೂತಿ" - ನನಗೆ ಈ ಸಾಲುಗಳು ಇಷ್ಟ ಆದವು.

ಹೀಗೇ ಬರೀತಿರಿ...

~ಶ್ರೀಹರ್ಷ

Sree said...

ಎಲ್ಲ ನೋಟಗಳಾಚೆ ನಿಮ್ಮ ಬ್ಲಾಗ್ ಲಿಂಕ್ ಕಾಣಿಸಿ ಇಲ್ಲಿ ಇಣುಕಿದೆ...ಸುಂದರ ಕವನಗಳು, ಕನಸುಗಳು!
"ನಿನ್ನ ಮನದ ಬಲು ಸನಿಹವಿದ್ದು,
ನಿನಗೆ ಒಳಿತಾಗಲೆ೦ದು ಬಯಸುವ
ಈ ಬೆಚ್ಚನೆಯ ಅನುಭೂತಿಯ
ಅನುಭವ ನಿನಗಾದರೆ
ಅದಕ್ಕಿಂತ ಬೇರೇನು ಬೇಕು?"
hmmm! beautiful lines... ಒಂದೊಂದ್ಸಲ ಕಳೆದದ್ದರ ಲೆಕ್ಕದಲ್ಲಿ ಬಿದ್ದು ಪಡೆದಿರೋದನ್ನ ಮರೆತು ಬಿಡ್ತೀವಿ...ಈ ಸಾಲುಗಳು ಅಂಥ ಮರೆವಿಂದ ಮೆಲ್ಲಗೆ ತಟ್ಟಿ ಎಬ್ಬಿಸೋ ಥರ ಅನ್ನಿಸ್ತು! ಚೆನ್ನಾಗಿ ಬರೀತೀರ, ನನ್ನ ಬ್ಲಾಗ್ ನಲ್ಲಿ ಲಿಂಕ್ ಮಾಡಿಕೊಳ್ತೀನಿ

Shree said...

ಶ್ರೀ, ಶ್ರೀಹರ್ಷ... ತು೦ಬಾ ಲೇಟ್ ಆಗಿ ನೋಡ್ತಾ ಇದೀನಿ, ಕ್ಷಮೆ ಇರಲಿ, ಮತ್ತೆ ಥ್ಯಾ೦ಕ್ಸ್.... ತು೦ಬ ಹೊಗಳಬೇಡಿ, ಬರ್ತಾ ಇರಿ...:-)